Models - ವಿಧಾನಗಳು

Fruit Model - ಹಣ್ಣಿನ ತೋಟ

ದಿನಾಂಕ 31-07-2020 ಮತ್ತು 01-08-2020, ಎರಡು ದಿನಗಳ ಕಾಲ ಪಂಚತರಂಗಿಣಿ (Five Layer) ಪದ್ದತಿಯಲ್ಲಿ ಹಣ್ನಿನ ಗಿಡಗಳ ಮಾದರಿ (Fruit Model) ಬಗ್ಗೆ ಚರ್ಚೆ ಮಾಡಲಾಯಿತು. ಇದರಲ್ಲಿ ಈ ಕೆಳಗಿನ ವಿಷಯಗಳ ಮೇಲೆ ಚರ್ಚೆ ಮಾಡಲಾಯಿತು,
- ಮಣ್ಣಿನ್ನ ತಯಾರಿ ಮಾಡಿಕೊಳ್ಳುವಿಕೆ ( Revised )
- ಯಾವ ಮಣ್ಣಿಗೆ ಯಾವ ಹಣ್ಣಿನ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು
- ಯಾವ ಪ್ರದೇಶಕ್ಕೆ ಯಾವ ತರಹದ ಹಣ್ಣಿನ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು
- ಗಿಡಗಳ ಅಂತರ
- ಗಿಡಗಳನ್ನು ಹಾಕಲು ಗುಣಿಗಳನ್ನು ತಯಾರು & ಗೊಬ್ಬರ ಹಾಕುವ ಬಗ್ಗೆ ಮಾಹಿತಿ
- ಯಾವ ಯಾವ ಹಣ್ಣಿನ ಗಿಡಗಳನ್ನು ಯಾವ ಯಾವ ತಿಂಗಳಲ್ಲಿ ನೆಡಬೇಕು
- ಗಿಡಗಳ ಪಾಲನೆ / ಘೋಷಣೆ
- ಹಣ್ಣುಗಳ ಕೊಯ್ಲು ಮಾಡುವ (harvesting) ಬಗ್ಗೆ ವಿವರ.
- Marketing ಮಾರುಕಟ್ಟೆ ವ್ಯವಸ್ಥೆ
- ಇತರೆ ಯಾವುದೇ ಸಂಬಂಧಿತ ವಿಷಯವಾಗಿರಬಹುದು

ಮೇಲಿನ ವಿಷಯದ ಬಗ್ಗೆ ಈ ಕೆಳಗಿನ ಗುರುಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ,
ಪ್ರಶಾಂತ್ ಜಯರಾಮ್ ಸರ್
ಡಾಕ್ಟರ್ ಹನುಮೇಗೌಡರು
ಶ್ರೀ ತಮ್ಮಯ್ಯ ಸಾರ್
ಶ್ರೀ. ಕುಮಾರ್ ರಾಮಚಂದ್ರಪ್ಪ ಸಾರ್
ಶ್ರೀ ಚಂದ್ರಶೇಖರ್ ನಾರಣಾಪುರ
ಶ್ರೀ. ಶಿವಕುಮಾರ್ ಸಾರ್
ಶ್ರೀ. ಸಂದೀಪ್ ಮಂಜುನಾಥ್ ಸಾರ್
ಶ್ರೀ ವಿಶ್ವೇಶ್ವರ ಸಜ್ಜನ ಸಾರ್
ಇತರರು

ಕೊರೋನಾದಿಂದಾಗಿ ಹಲವು ಮಂದಿ ಸಂಕಷ್ಟಕ್ಕೆ ಸಿಲುಕಿ ಮತ್ತೆ ಮರಳಿ ಭೂಮಿಗೆ ಬಂದಿದ್ದಾರೆ, ಅವರಿಗೆ ಕೃಷಿಯಲ್ಲಿ ಭರವಸೆಯನ್ನು ಹುಟ್ಟಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಆಯ್ದುಕೊಂಡ ವಿಷಯ 'ಪ್ರೂಟ್ ಮಾಡೆಲ್' ಅಂದರೆ ಹಣ್ಣಿನ ತೋಟವನ್ನು ಬೆಳೆಸುವ ಬಗೆ. ಎರಡು ಮೂರು ವರ್ಷಗಳಲ್ಲಿ ಒಂದು ಸುಸ್ಥಿರವಾದ ತೋಟವನ್ನು ನೇಮಿಸುವ ಬಗ್ಗೆ ನಮ್ಮ ತಜ್ಞರು ನಿಮಗೆ ಮಾಹಿತಿಯನ್ನು ಕೊಟ್ಟಿದ್ದಾರೆ. ಇಲ್ಲಿ ಎಲ್ಲರಿಗೂ ಉಪಯೋಗವಾಗಲೆಂದು ಹಂಚಿಕೊಳ್ಳುತ್ತಿದ್ದೇನೆ.

                                                                ಡಾ. ಎಲ್ ಹನುಮೇಗೌಡ
                    Secretary. Dr. M H Marigouda - Harticulture Education & Research Foundation

ಹನುಮೇಗೌಡರು ,88 ವರ್ಷ ವಯಸ್ಸಾಗಿದ್ದು, ಕೃಷಿಯ ಬಗ್ಗೆ ಅವರಿಗೆ ಇರುವ ಉತ್ಸಾಹಕ್ಕೆ ಏನೂ ಕಡಿಮೆಯಿಲ್ಲ. ಇವರು ಮರಿಗೌಡರ ಜೊತೆ ಹಲವು ವರ್ಷಗಳ ಕಾಲ ಕೆಲಸ ಮಾಡಿದವರು. 

ಡಾಕ್ಟರ್ ಹನುಮೇಗೌಡರು ತಮ್ಮ ಕೈಯಾರೆ ಬರೆದ ಒಂಬತ್ತು ಪುಟಗಳ ಮಾಹಿತಿ,







ಇದೇ ಮಾಹಿತಿಯನ್ನು ಡಾಕ್ಟರ್ ಹನುಮೇಗೌಡರು ಆಡಿಯೋ ಮೂಲಕ ಕೂಡ ಕಳುಹಿಸಿದ್ದಾರೆ.
 

ನಮ್ಮ ಹಣ್ಣಿನ ನಮ್ಮ ಫ್ರೂಟ್ ಮಾಡೆಲ್ನ ಒಬ್ಬ ವಿದ್ಯಾರ್ಥಿ ಸಂಗಾ ರೆಡ್ಡಿ ಅವರು ಈವರೆಗೆ ಕಂಡ ಗೆಲುವಿಗಿಂತ ಸೋಲುಗಳೇ ಜಾಸ್ತಿ, ಅವರ ಮಾತುಗಳನ್ನು ಸ್ವಲ್ಪ ಕೇಳೋಣ...


ಮೇಲಿನ ಎಲ್ಲಾ ವಿಷಯಗಳು ಮೊದಲ ದಿನದ ಮಾಹಿತಿಯಾಗಿದ್ದು, ಎರಡನೇ ದಿನದ ಚರ್ಚೆಯಲ್ಲಿ ನಮ್ಮ ಗುಂಪಿನ ಹಿರಿಯ ಸದಸ್ಯರು ಹೆಚ್ಚಿನ ಮಾಹಿತಿಯನ್ನು ಕಿರಿಯ ಕೃಷಿಕರಿಗೆ ಉಪಯೋಗವಾಗುವಂತಹ ಸಲಹೆಗಳನ್ನು ನೀಡಿದ್ದಾರೆ.

ಡಾ|| ಹನುಮೆಗೌಡರ ಪ್ರತಿಕ್ರಿಯೆ:-

ಪ್ರಶಾಂತ್ ಜಯರಾಮ್ ಅವರ ಪ್ರತಿಕ್ರಿಯೆ:-

*ಯಾವುದೇ ಬೆಳೆ ಮಾಡುವ ಮುನ್ನ ಮಣ್ಣಿನ ಸುಧಾರಣೆ ಮತ್ತು ಸಂರಕ್ಷಣೆ ಹಾಗು ಮರಧಾರಿತ ಹಣ್ಣಿನ ಬೆಳೆ ಕುರಿತು ನಾರಾಯಣ ರೆಡ್ಡಿ ಅವರ ಸುಸ್ಥಿರ ಕೃಷಿ ಪಾಠಗಳು ಪುಸ್ತಕದಲ್ಲಿ ಮಾಹಿತಿಯಿದೆ,ಈ ಪುಸ್ತಕದ ಅನುಕೂಲ ಪಡೆಯಬಹುದು.
*ವಿವಿಧ ಬೆಳೆಗಳಿಗೆ ಬೇಕಾಗುವ ಮಣ್ಣಿನ ಗುಣ,ಅಂತರ ಇವುಗಳ ಬಗ್ಗೆ ತೋಟಗಾರಿಕೆ ವಿವಿ ಯವರ ಸಮಗ್ರ ತೋಟಗಾರಿಕೆ ಕೈಪಿಡಿ ಅಥಾವಾ ಬೇರೆ ಪುಸ್ತಕಗಳ ನೆರವು ಪಡೆಯಬಹುದು.
*ವರ್ಷದ ಎಲ್ಲಾ ಕಾಲದಲ್ಲೂ ಹಣ್ಣು ಬರುವ ರೀತಿ ಆಯಾಯ ಪ್ರದೇಶಕ್ಕೆ ಹೊಂದುವ ಹಣ್ಣಿನ ಬೆಳೆ ಮಾಡುವುದು.
*ಕನಿಷ್ಠ 5-6 ಹಣ್ಣಿನ ಬೆಳೆಗಳು ಇರುವಂತೆ ನೋಡಿಕೊಳ್ಳುವುದು.
*ಸ್ಥಳೀಯ ಪ್ರದೇಶದಲ್ಲಿ ಮಾರುಕಟ್ಟೆ ಗಮನಿಸಿ ಬೆಳೆ ಹಾಕುವುದು ಮತ್ತು ನೇರ ಮಾರಾಟಕ್ಕೆ ಸ್ಥಳೀಯವಾಗಿ ಬೇಡಿಕೆ ಇರುವ ಬೆಳೆ ಹಾಕುವುದು.
*ಸ್ಥಳೀಯ ಹವಾಗುಣಕ್ಕೆ, ಮಣ್ಣಿಗೆ ಹೊಂದಿಕೊಳ್ಳುವ ಹಣ್ಣಿನ ಗಿಡಗಳನ್ನು ಹಾಕಿದಾಗ ಅವುಗಳಿಗೆ ಯಾವುದೇ ವಿಶೇಷ ಆರೈಕೆ, ಪಾಲನೆ, ಪೋಷಣೆ, ಒಳಸುರಿ ಇಲ್ಲದೇ ಸಹಜವಾಗಿ ಬೆಳೆಯುವುದು,ನಮ್ಮ ಮಣ್ಣಿಗೆ ಹೊಂದುವ ಹಣ್ಣಿನ ಬೆಳೆಯನ್ನು ಸೂಕ್ಷ್ಮವಾಗಿ ಗಮನಿಸಿ ಅನುಭವದ ಆಧಾರದಲ್ಲಿ ಅದನ್ನು ಖಚಿತ ಪಡಿಸಿಕೊಳ್ಳುವುದು.
*ಸ್ಥಳೀಯ ಪ್ರದೇಶದಲ್ಲಿ ಈಗಾಗಲೇ ತೋಟಗಾರಿಕೆ ಬೆಳೆ ಬೆಳೆದು ಯಶಸ್ಸು ಕಂಡಿರುವ ರೈತರ ತೋಟಗಳಿಗೆ ಭೇಟಿ ಮತ್ತು ಅವರ ಅನುಭವ ಪಡೆಯುವುದು.
*ಮೌಲ್ಯವರ್ಧನೆ ಬಗ್ಗೆ :ತೆಂಗಿನಿಂದ ಕೊಬ್ಬರಿ ಎಣ್ಣೆ,ಸೋಪು,ನಿಂಬೆಯಿಂದ ಜ್ಯೂಸ್,ಮಾವಿನಿಂದ ಉಪ್ಪಿನಕಾಯಿ,ಬಾಳೆಯಿಂದ ಚಿಪ್ಸ್, ಹಲ್ವಾ, ಬೆಟ್ಟದ ನೆಲ್ಲಿಕಾಯಿಂದ ಚೂರ್ಣ ಈ ರೀತಿ ಸಾಕಷ್ಟು ಹಣ್ಣುಗಳಿಂದ ವಿವಿಧ ರೀತಿ ಉತ್ಪನ್ನ ಮಾಡಬಹುದು, ಈ ಬಗ್ಗೆ ನುರಿತ ತಜ್ಞರಿಂದ ತಯಾರಿಕೆ ಕ್ರಮ ಕಲಿಯಬೇಕು. 
*ಹಣ್ಣುಗಳು ಕೆಡದಂತೆ ಒಣಗಿಸಿ ಅವುಗಳನ್ನು ಮಾರಾಟ ಮಾಡಬಹುದು,ಇದಕ್ಕೆ ಸೋಲಾರ್ dryer ಬೇಕಾಗುತ್ತದೆ.ಕಡಿಮೆ ವೆಚ್ಚದಲ್ಲಿ ಸೋಲಾರ್ dryer ನಿರ್ಮಿಸಿಕೊಳ್ಳಬಹುದು.

ಚಂದ್ರಶೇಖರ ನಾರಣಾಪುರ, ಕೃಷಿ ನಿವಾಸ ಚಿಕ್ಕಮಗಳೂರು.

🐂 ರೈತ ಕಾಯಕನಿಷ್ಟನಾಗಿದ್ದರೆ ಸಾಲದು, ಬುದ್ಧಿವಂತನಾಗಿರಬೇಕು. ರೈತರಿಗೆ ಕೃಷಿಯೇ ಆದಾಯದ ಮೂಲವಾಗಿರುವುದರಿಂದ ಯೋಜನೆ ಚನ್ನಾಗಿದ್ದರೆ ಬಡತನ ದೂರ.
🐂 ನಾನು 2008 ರಲ್ಲಿ ಕೃಷಿ ಆರಂಭಿಸಿದಾಗ ಹಣ್ಣು ಆಧಾರಿತ ಕೃಷಿಯನ್ನೇ ಮಾಡಿದ್ದು. ನನಗೆ ಆಗ ಈಗಿನ ಬುದ್ಧಿಮತ್ತೆ ಇಲ್ಲದ ಕಾರಣ ಏಕ ರೂಪದ ಬಾಳೆ ಬೆಳೆ ಮಾಡಿದ್ದೆ. ಅನುಕೂಲವಾಯಿತು. ಈಗಿನ ಜ್ಞಾನ ಇದ್ದಿದ್ದರೆ ಬಹು ಹಣ್ಣಿನ ಬೆಳೆ ಮಾಡುತ್ತಿದ್ದೆ.
🐂ತೋಟಗಾರಿಕೆಯ ಲ್ಲಿ ಹಣ್ಣು ಬೆಳೆಗಳು ನಿಶ್ಚಿತ ಆದಾಯವನ್ನು ತಂದುಕೊಡಬಲ್ಲವು. ಈ ಕಾರಣದಿಂದ ಒಂದು ಎಕರೆ ಪ್ರದೇಶವನ್ನು ಎರಡು ಭಾಗ ಮಾಡಿ ಅರ್ದ ಎಕರೆಯಲ್ಲಿ 6×6 ರ ಅಳತೆಯಲ್ಲಿ (ಸಾಂದ್ರತೆಯಲ್ಲಿ) 610 ಬಾಳೆಯನ್ನು ಏಕ ಬೆಳೆಯಾಗಿ ಬೆಳೆಯ ಬಹುದು.
🐂 ಇನ್ನರ್ದ ಎಕರೆಯಲ್ಲಿ 15×15 ಅಡಿ ಅಳತೆಯಲ್ಲಿ 100 ನಿಂಬೆ ಗಿಡ. ನಿಂಬೆ ಗಿಡದ ಆಚೆ ಈಚೆ 15×15 ಅಡಿ ಅಳತೆಯಲ್ಲಿ 100 ಗಿಡ ಪಪ್ಪಾಯ . ಬದುವಿನ ಸುತ್ತಲೂ ಒಂದು ಹಲಸು ಒಂದು ಪೇರಲು (ಸೀಬೆ) ಈ ರೀತಿ 50 ಹಲಸು, 50 ಸೀಬೆ ಗಿಡಗಳನ್ನು ಬೆಳೆಯ ಬಹುದು. ನಿರಂತರ ಆದಾಯವನ್ನು ಗಳಿಸಬಹುದು.

ತಮ್ಮಯ್ಯ ಸರ್ ಅವರು ಆಡಿಯೋ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ:-

ತಮ್ಮಯ್ಯ ಸರ್ ಅವರ ಆಡಿಯೋ

ಶಿವಕುಮಾರ್ ಅವರು ಆಡಿಯೋ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ ಹಾಗೂ ಹಲವು ಉತ್ಸಾಹಿ ಯುವ ಕೃಷಿಕರು ಕೇಳಿದ ಪ್ರಶ್ನೆಗಳಿಗೂ ಕೂಡ ಉತ್ತರ ನೀಡಿದ್ದಾರೆ. ಈ ಚರ್ಚೆಯಲ್ಲಿ ಅವರು ಮಾತನಾಡಿದ ಎಲ್ಲಾ ಆಡಿಯೋಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಶಿವಕುಮಾರ್ ಅವರ ಆಡಿಯೋ - ಹಣ್ಣಿನ ತೋಟ
ಶಿವಕುಮಾರ್ ಅವರ ಆಡಿಯೋ - ಹಣ್ಣಿನ ತೋಟ- 1
ಹಲವರು ಕೇಳಿದ ಪ್ರಶ್ನೆಗಳಿಗೆ ಉತ್ತರಗಳು

ಕುಮಾರ ರಾಮಚಂದ್ರಪ್ಪ, ಕೃಷಿ ನಿವಾಸ ಚಿಕ್ಕಮಗಳೂರು.

ಇವರು ಕೃಷಿಯಲ್ಲಿ ತುಂಬಾ  ಪ್ರಯೋಗ ಮಾಡಿದ್ದಾರೆ, ಯುವ ಕೃಷಿಕರು ತಪ್ಪದೇ ಅವರನ್ನು ಅವರ ತೋಟದಲ್ಲಿ ಭೇಟಿಯಾಗಿ


ಶ್ರೀ. ಸಂದೀಪ್ ಮಂಜುನಾಥ್ ಅವರ ಪ್ರತಿಕ್ರಿಯೆ


ಸಂದೀಪ್ ಅವರು ಟ್ರೈಕೊಡೆರ್ಮ ಬಗ್ಗೆ ಮಾಹಿತಿ ನೀಡಿದ್ದು,

ಸಂದೀಪ್ ಅವರು ಹಣ್ಣಿನ ತೋಟದ ಬಗ್ಗೆ ಮಾಹಿತಿ ನೀಡಿದ್ದು,

ಸಂದೀಪ್ ಅವರು ಹಣ್ಣಿನ ತೋಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದು.

ಇದೇ ಸಮಯದಲ್ಲಿ ಸಂದೀಪ್ ಅವರು ತಮ್ಮ ತೋಟದ ಪರಿಚಯ ಮಾಡಿಕೊಟ್ಟು, ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಹಾಕುವುದರಿಂದ ಏನು ಉಪಯೋಗ ಎಂದು ವಿವರಿಸಿದರು, 



ಡಾ|| ನಾಗಭೂಷಣ್ ಸರ್ ಅವರು ಕೂಡ್ಲಿಗಿ ತಾಲ್ಲೂಕಿನ ಸಜ್ಜನ್ ಸರ್ ಅವರ ಜೊತೆಗೆ ಪೋನಿನ ಮೂಲಕ ಮಾಡಿದ ಸಂಭಾಷಣೆಯನ್ನು ಕೆಳಗಿನ ಲಿಂಕ್ ಮೂಲಕ ಕೇಳಬಹುದು.
ಸಜ್ಜನ್ ಸರ್ ಅವರ ಆಡಿಯೋ



ಹಣ್ಣಿನ ತೋಟ ಮಾಡುವವರಿಗೆ ಡಾ||ನಾಗಭೂಷಣ್ ಸರ್ ಅವರ ಎಚ್ಚರಿಕೆಯ ಮಾತು,
ಎಚ್ಚರ!!
- ಮರದ ತೋಟ ಮಾಡುವಾಗ ಸ್ವಲ್ಪ ಹುಷಾರಾಗಿರಿ ಏಕೆಂದರೆ ಒಮ್ಮೆ ಹಾಕಿದ ನಂತರ ಅದನ್ನು ಬದಲಾವಣೆ ಮಾಡುವುದು ತುಂಬಾ ಕಷ್ಟ. 
- ಸಾಕಷ್ಟು ಅಧ್ಯಯನ ಮಾಡಿ
- ಮಾಡಿರುವ ತೋಟಗಳನ್ನು ಹೋಗಿ ನೋಡಿಕೊಂಡು ಬನ್ನಿ ನಂತರ ಆರಂಭ ಮಾಡಿ
- ಇಲ್ಲಿ ನಾವು ಕೊಟ್ಟ ಮಾಹಿತಿ ಕೇವಲ ಚುಟುಕುಗಳು ಅಷ್ಟೇ

ಸಜ್ಜನ್ ಅವರು ಡಾ||ನಾಗಭೂಷಣ್ ಅವರ ಜೊತೆ ನಡೆಸಿದ ಸಂಭಾಷಣೆ,

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತ ಸಮಯದಲ್ಲಿ ವಿಶ್ವೇಶ್ವರ ಸಜ್ಜನ್ ಅವರ ಮಾತುಗಳು


^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^
ಶ್ರೀಯುತ. ಶಿವಕುಮಾರ್ ಹೆಗ್ಗವಾಡಿಪುರ ಇವರ ಮಾರ್ಗದರ್ಶನದಲ್ಲಿ August 11, 2018 ರಂದು ಹದಿನೈದು ಮಂದಿ ಉತ್ಸಾಹಿ ರೈತರನ್ನು ಆಯ್ಕೆ ಮಾಡಿಕೊಂಡು, ಅವರಿಗೆ ಪ್ರಥಮ ಹಂತದ ಫ್ರೂಟ್ ಮಾಡೆಲ್ ಬಗ್ಗೆ ತರಬೇತಿ ಕೊಡಲಾಯಿತು. 

ಅವರಿಗೆ ಆ ವೇಳೆ ಬರೀ ಬಣ್ಣ - ಬಣ್ಣದ ಕತೆಗಳಷ್ಥೇ ಹೇಳಲಿಲ್ಲ. ಆಗ ತೋರಿಸಿದ 5 ತೋಟಗಳಲ್ಲಿ ಅವರಿಗೆ ಹೇಳಿದ್ದು ಆ ತೋಟ ಕಟ್ಟುವಾಗಿನ ಸೋಲಿನ ಕತೆಗಳನ್ನ ನಮ್ಮ ನಂಬಿ ಬಂದ ರೈತರಿಗೆ ಹೇಳಿದ್ದು- "ನಿಮಗೆ ಮಾಯಾ ಜಿಂಕೆ ತೋರಿಸಿ... ಪಾಶಕ್ಕೆ ಸಿಲುಕಿಸುವುದಲ್ಲ; ನಮ್ಮ ಗುರಿ ಬೆಂಕಿಯಲ್ಲಿ.. ಬೆಂದ ಬಂಗಾರವನ್ನಾಗಿಸುವುದು". ಅಂತೆಯೇ ಅವರು ಏಳು - ಬೀಳುಗಳ ಮದ್ಯೆ ಛಲ ಬಿಡದ ತ್ರಿವಿಕ್ರಮನಂತೆ ಸಾಧನೆ ಮಾಡಿ; ಮಾಡಿದ್ದನ್ನ ಕನ್ನೇರಿಯಲ್ಲಿ (07-03-2020) ಸೇರಿದ್ದ ಇತರೆ ರೈತರೋಂದಿಗೆ ಹಂಚಿಕೊಂಡರು. ಇತರೆ ರೈತರು ತೋರಿಸಿದ ಪ್ರೀತಿ ಮತ್ತು ಚಪ್ಪಾಳೆಯ ಸ್ಫೂರ್ತಿ ಅವರನ್ನು ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಿಸಿತು. ಇವರ ಜೋತೆ ಇನ್ನೂ 10 ಮಂದಿ ರೈತರು ಸಾಧನೆಯ ಹಾದಿಯಲ್ಲಿದ್ದಾರೆ. ಅವರನ್ನೂ.... ನಾವು ಗಮನಿಸುತಿದ್ದೇವೆ. ಮುಂದೆ ತಮ್ಮ ಪ್ರಗತಿಯನ್ನು ಅವರೂ ಸಹ ಹಂಚಿಕೊಳ್ಳಲಿದ್ದಾರೆಂಬುದೇ ನಮ್ಮ ಭರವಸೆ.
ಫೋಟೋದಲ್ಲಿ ಇರುವವರು :-
1. Ravi kumar (ಗಡ್ಡದವರು) Bellary - 9986711975
2. Doddabasavana Gouda - Bellary - 9449171590
3. Sangareddy (blue shirt) ರಾಯಚೂರು 9164777109
4. Dr. B. M Nagabhushana (co-ordinator, MSRIT - LSIKC, Bangalore)
5. Shivakumara Heggavadipura (ಮಾರ್ಗದರ್ಶಕರು)
6. Uday ಮೈಸೂರು 9980377787
7. Harish ಕೋಲಾರ - +917892862984

**********************************************

ಕೊನೆಯದಾಗಿ ಚರ್ಚೆಯಲ್ಲಿ ಭಾಗವಹಿಸಿ, ಹೆಚ್ಚಿನ ಮಾಹಿತಿ ನೀಡಿದ ಎಲ್ಲಾ ಸಂಪನ್ಮೂಲ ಗುರುಗಳಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.
ಶ್ರೀಯುತ ತಮ್ಮಯ್ಯ ಸರ್ ಅವರು ಅಭಿನಂದನೆಗಳನ್ನು ಆಡಿಯೋ ಮೂಲಕ ಸಲ್ಲಿಸಿದ್ದಾರೆ,

***************************^^^^^^^***********************

Vegetable Model - ತರಕಾರಿ ತೋಟ

ದಿನಾಂಕ 18-09-2020 ತರಕಾರಿ ತೋಟ (Vegetable Model) ದ ಬಗ್ಗೆ ಚರ್ಚೆ ಮಾಡಲಾಯಿತು, ಇದರಲ್ಲಿ ಈ ಕೆಳಗಿನ ಮಹಾಗುರುಗಳು ಭಾಗವಹಿಸಿ ತಮ್ಮ ಅಮೋಘ ಜ್ನಾನವನ್ನು ಇಲ್ಲಿ ಎಲ್ಲರಿಗೂ ಹಂಚಿಕೊಂಡಿದ್ದಾರೆ,
    - ಶಿವರಾಂ ಭಟ್
    - ಬೀಜದ ಕಾಳಪ್ಪ
    - ಪ್ರಶಾಂತ್ ಜಯರಾಂ 
    - ಶಿವಕುಮಾರ್ 
    - ತುಕಾರಾಂ
    - ಕುಮಾರ್ ರಾಮಚಂದ್ರಪ್ಪ
    - ಹನುಮೇ ಗೌಡರು
ಇದರ ಜೊತೆಗೆ ಮಹಾಗುರುಗಳಾದ ಶ್ರೀಮಾನ್ ನಾಗಭೂಷಣ್ ಅವರ ಅನೇಕ ಮಹನೀಯರ ಜೊತೆ ಮಾತನಾಡಿರುವ ಸಂಭಾಷಣೆಗಳು ಹಾಗೂ ವೀಡಿಯೊಗಳನ್ನು ಕೂಡ ಇಲ್ಲಿ ಸೇರಿಸಲಾಗಿದೆ.

ಪ್ರಶಾಂತ್ ಜಯರಾಮ್  ಅವರು ನಾರಾಯಣ  ರೆಡ್ಡಿಯವರ ಸುಸ್ಥಿರ ಕೃಷಿ ಪಾಠಗಳು ಪುಸ್ತಕದಿಂದ ಸಂಗ್ರಹಿಸಿರುವ ಮಾಹಿತಿ:-
ತರಕಾರಿ/ಸೊಪ್ಪುಬೆಳೆಯ ಪ್ರಮುಖ ಅಂಶಗಳು
1) ಬೆಳೆ ಆಯೋಜನೆ
ತರಕಾರಿ/ಸೊಪ್ಪು ಬೆಳೆಯುವರು ಪೂರ್ವ ನಿಗಧಿತ ಮಾರುಕಟ್ಟೆ/ಗ್ರಾಹಕರನ್ನು ಗುರುತಿಸಿಕೊಂಡು ಬೇಡಿಕೆ ಅನುಸಾರ ವರ್ಷ ಪೂರ್ತಿ ಸರಪಣಿ ಮುಂದುವರೆಯುವಂತೆ ಬೆಳೆ ಆಯೋಜನೆ ಮಾಡಬೇಕು.15 ದಿನಕೊಮ್ಮೆ ಸೊಪ್ಪು,ತಿಂಗಳಿಗೊಮ್ಮೆ ಬೀನ್ಸ್,ಮೂಲಂಗಿ,ಮೂರು ತಿಂಗಳಿಗೊಮ್ಮೆ ಬದನೆ, ಟೊಮೇಟೊ, ಮೆಣಸಿನಕಾಯಿ, ಬೆಂಡೆಕಾಯಿ ಈ ರೀತಿಯಾಗಿ ಮುಂದುವರೆಸಬೇಕು. 

2)ಮಾರುಕಟ್ಟೆ
ರೈತರು ಮತ್ತು ಗ್ರಾಹಕರು ಸೇರಿ ಪೂರ್ವ ನಿಗಧಿತ ಸ್ಥಳದಲ್ಲಿ ಪ್ರತಿ ವಾರ ಸಂತೆಗಳನ್ನು ನೆಡೆಸಬಹುದು.ಜಮೀನಿನ ಸಮೀಪ ಸ್ಥಳೀಯವಾಗಿ ವಾಸವಾಗಿರುವ 5-6 ಕುಟುಂಬಗಳನ್ನು ಸಂಪರ್ಕ ಮಾಡಿ ತರಕಾರಿ/ಸೊಪ್ಪು ಪೂರೈಸುವ ವ್ಯವಸ್ಥೆ ಮಾಡಿಕೊಳ್ಳಬಹುದು.
*ಪೂರ್ವ ನಿಗಧಿತ ಮಾರುಕಟ್ಟೆ/ಗ್ರಾಹಕರನ್ನು ತಲುಪಲಾಗದ ರೈತರು ಮನೆ ಬಳಕೆಗೆ ಬೇಕಾಗುವ ತರಕಾರಿ/ಸೊಪ್ಪು ಬೆಳೆದುಕೊಳ್ಳಬಹುದು.
 
3)ಬೀಜ ಮತ್ತು ಗೊಬ್ಬರ 
ದುಬಾರಿ ಬೀಜ,ಗೊಬ್ಬರ,ನೀರು, ಕೀಟನಾಶಕ ಹೆಚ್ಚಾಗಿ ಬಯಸುವ ತರಕಾರಿಗಳನ್ನು ರೈತರು ಬೆಳೆಯುವುದನ್ನು ಮತ್ತು ಗ್ರಾಹಕರು ಬಳಸುವುದಕ್ಕೆ ಕಡಿವಾಣ ಹಾಕಿಕೊಳ್ಳಬೇಕು(ಎಲೆಕೋಸು, ಹೂಕೋಸು,ಕ್ಯಾಪ್ಸಿಕಂ, ಹೈಬ್ರಿಡ್ ಟೊಮ್ಯಾಟೋ ಇತ್ಯಾದಿ)ಸ್ಥಳೀಯವಾಗಿ ಬರನಿರೋಧಕ ಮತ್ತು ರೋಗನಿರೋಧಕವಾಗಿ ಬೆಳೆಯುವ ಗೆಡ್ಡೆ ತರಕಾರಿಗಳಾದ ಸಿಹಿ ಗೆಣಸು, ಮರಗೆಣಸು,ಸುವರ್ಣಗೆಡ್ಡೆ, ಕೆಸುವಿನ ಗೆಡ್ಡೆ ಮುಂತಾದವು ಮತ್ತು ಬಳ್ಳಿ ತರಕಾರಿಗಳಾದ ಸೋರೆಕಾಯಿ, ಹಿರೇಕಾಯಿ, ಕುಂಬಳಕಾಯಿ, ಹಾಗಲಕಾಯಿ, ಪಡವಲಕಾಯಿ, ತುಪ್ಪದ ಹಿರೇಕಾಯಿ, ತೊಂಡೆಕಾಯಿ,ಸೌತೆಕಾಯಿ, ಇತ್ಯಾದಿ ಇವುಗಳ ಬಳಕೆ ಹೆಚ್ಚಿಸಬೇಕು. 
*ನಾಟಿ/ಸುಧಾರಿತ ತಳಿ ಬೀಜ ಆಯ್ಕೆ ಮಾಡಿಕೊಂಡು ತದನಂತರ ಮುಂದಿನ ಬೆಳೆಗಳಿಗೆ ಬೀಜ ಉತ್ಪಾದನೆ ಮಾಡಿ ಬೀಜಗಳನ್ನು ಸಂರಕ್ಷಣೆ ಮಾಡಿಕೊಳ್ಳಬಹುದು.ಬೀಜ ಉತ್ಪಾದನೆ ಮತ್ತು ಸಂರಕ್ಷಣೆಯನ್ನು ಅನುಭವಿ ರೈತರಿಂದ ಕಲಿತು ಮಾಡುವುದು. 
*ತರಕಾರಿ ಬೆಳೆಯುವ ವಿಸ್ತರಣೆಗೆ ಅನುಗುಣವಾಗಿ compost ಗೊಬ್ಬರ ತಯಾರಿಸಿಕೊಳ್ಳಬೇಕು.ಪ್ರತಿ 100 sqft(ಚದರಡಿ) ಪ್ರದೇಶಕ್ಕೆ 20 ಕೆಜಿ ಯಂತೆ 01 ಗುಂಟೆಗೆ (33'*33') 200ಕೆಜಿ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿನೊಂದಿಗೆ ಬೆರೆಸಬೇಕು. 
*ಬೆಳೆವಣಿಗೆ ಹಂತದಲ್ಲಿ ದ್ರವ ರೂಪದ ಗೊಬ್ಬರವನ್ನು ನೀರಿನೊಂದಿಗೆ ಅಥವಾ ಸಿಂಪಡಣೆ ಮೂಲಕ ಒದಗಿಸಬಹುದು.ಮೀನಿನ ದ್ರಾವಣ,ಗಂಜಲ,  ಪಂಚಗವ್ಯ,ಜೀವಾಮೃತ, ವೇಸ್ಟ್ ಡಿಕಂಪೋಸರ್ ಇತ್ಯಾದಿಗಳು.
 
4)ಕಳೆ ನಿಯಂತ್ರಣ
ಭೂಮಿಯ ಸೂಕ್ತ ಸಿದ್ಧತೆ ಮತ್ತು ಸರಿಯಾದ ಕಾಂಪೋಸ್ಟ್ ಬಳಕೆ ಮಾಡುವುದರ ಮೂಲಕ ಶೇ 60% ಹೆಚ್ಚು ಕಳೆ ತರಕಾರಿ ಬೆಳೆಗಳ ನಡುವೆ ಬಾರದ ರೀತಿ ತಡೆಗಟಬಹುದು.
ತರಕಾರಿ ಬೆಳೆಯಲಿ ಕಳೆ ನಿಯಂತ್ರಣ ಪ್ರಮುಖ ಸವಾಲು,ಅಳುಗಳ ಮೂಲಕ ಕಳೆ ತೆಗೆಸುವುದು ಹೆಚ್ಚು ತ್ರಾಸದಾಯಕ ಮತ್ತು ಸಾಕಷ್ಟು ಆಳುಗಳನ್ನು ಬೇಡುತ್ತದೆ ಮತ್ತು ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ.ತರಕಾರಿ ಬೆಳೆಯುವ ಒಟ್ಟು ಖರ್ಚಿನಲ್ಲಿ ಶೇ 60% ಕ್ಕೂ ಅಧಿಕ ಹಣ ಕಳೆ ನಿಯಂತ್ರಣಕ್ಕೆ ಮಾಡಬೇಕಾಗುತ್ತದೆ.ಕಳೆ ನಿಯಂತ್ರಣ ಮತ್ತು ಹಣ ಉಳಿತಾಯ ಮಾಡಲು ತರಕಾರಿ ಸಾಲುಗಳ ನಡುವೆ ಮೊದಲ ಹಂತದಲ್ಲಿ ಸೊಪ್ಪುಗಳನ್ನು ಬೆಳೆಸುವುದು,ಮುಚ್ಚಿಗೆ ಮಾಡುವುದು,ಸಾಲುಗಳ ನಡುವೆ ವೀಡರ್ ಅಥಾವಾ ಸಾಲಿಗೆ ಹೊಂದಾಣಿಕೆಯಾಗುವ ಟಿಲ್ಲರ್ ಬಳಸಿ ಮಾಡಿಕೊಳ್ಳಬೇಕು,ಏರುಮಡಿಯಲ್ಲಿ ಬರುವ ಕಳೆಗಳನ್ನು ಮಾತ್ರ ಆಳುಗಳ ಸಹಾಯದಿಂದ ಕೈ ಮೂಲಕ ತೆಗೆಯಬೇಕು.ಕಿತ್ತ ಕಳೆಗಳನ್ನು ಸಾಲಿನಲ್ಲಿ ಮುಚ್ಚಿಗೆ ಮಾಡಬೇಕು.

5)ಕೀಟ ಮತ್ತು ರೋಗ ನಿಯಂತ್ರಣಕ್ಕೆ
ಬೇವಿನ ಕಷಾಯ,ಹುಳಿ ಮಜ್ಜಿಗೆ, ಗಂಜಲ,ಸೀಗೆಪುಡಿ ಕಷಾಯ,ಎಲೆಗಳ ಕಷಾಯ,  ಬೆಳ್ಳುಳಿ-ಶುಂಠಿ ಕಷಾಯ, companion plants(ಸಹಚರ ಸಸ್ಯಗಳು),ಚೆಂಡು ಹೂವು,ಬೆಳಕಿನ ಬಲೆ,ಆಕರ್ಷಕ ಬಲೆ ಇತ್ಯಾದಿಗಳ ಮೂಲಕ ಮಾಡುವುದು.

6)ಋತುಮಾನಕ್ಕೆ ಅನುಗುಣವಾಗಿ ಬೆಳೆಯುವ ತರಕಾರಿ ಮತ್ತು ಸೊಪ್ಪುಗಳು
1)ಅಲಸಂದೆ:ಫೆಬ್ರವರಿ-ಮಾರ್ಚ್ ಮತ್ತು ಜೂನ್-ಜುಲೈ 
2)ಆಲೂಗೆಡ್ಡೆ:ಏಪ್ರಿಲ್-ಮೇ ಮತ್ತು ನವೆಂಬರ್-ಡಿಸೆಂಬರ್
 3)ಈರುಳ್ಳಿ :ವರ್ಷದ ಎಲ್ಲಾ ತಿಂಗಳು 
4)ಎಲೆಕೋಸು:ಜೂನ್, ನವೆಂಬರ್ 
5)ಬೂದು ಕುಂಬಳ,ಸಿಹಿ ಕುಂಬಳ :ಮಾರ್ಚ್ ನಿಂದ ಜುಲೈ ತಿಂಗಳವರೆಗೆ.
6)ಕ್ಯಾರಟ್:ಜೂನ್,ಡಿಸೆಂಬರ್
7)ಸಿಹಿಗೆಣಸು:ವರ್ಷವಿಡೀ ಬೆಳೆಯಬಹುದು.
8)ಗೆಡ್ಡೆಕೋಸು:ಜೂನ್, ಡಿಸೆಂಬರ್
9)ಗೋರಿಕಾಯಿ:ಮಾರ್ಚ್-ಏಪ್ರಿಲ್,ಜೂನ್-ಜುಲೈ,   ಅಕ್ಟೋಬರ್-ನವೆಂಬರ್
10)ಚಪ್ಪರದ ಅವರೆಕಾಯಿ:ಜುಲೈ, ಆಗಸ್ಟ್ 
11)ಟೊಮೊಟೊ:ವರ್ಷವಿಡೀ ಬೆಳೆಯಬಹುದು,ಜೂನ್-ಜುಲೈ,ಅಕ್ಟೋಬರ್-ನವೆಂಬರ್, ಜನವರಿ-ಫೆಬ್ರವರಿ ಉತ್ತಮ.
12)ತಿಂಗಳು ಹುರಳಿಕಾಯಿ:ವರ್ಷವಿಡೀ ಬೆಳೆಯಬಹುದು.
13)ತೊಂಡೆಕಾಯಿ:ಜೂನ್, ಜುಲೈ, ಆಗಸ್ಟ್
14)ಪಡವಲಕಾಯಿ:ಜನವರಿ-ಫೆಬ್ರವರಿ
15)ಬಟಾಣಿ:ಅಕ್ಟೋಬರ್, ನವೆಂಬರ್ 
16)ಬದನೆಕಾಯಿ:ವರ್ಷವಿಡೀ ಬೆಳೆಯಬಹುದು.ನವೆಂಬರ್-ಡಿಸೆಂಬರ್, ಜುಲೈ-ಆಗಸ್ಟ್ ತಿಂಗಳು ಉತ್ತಮ.
17)ಬೀಟ್ ರೂಟ್ -ಮಾರ್ಚ್, ಏಪ್ರಿಲ್,ಮೇ ತಿಂಗಳು ಬಿಟ್ಟು ವರ್ಷದ ಉಳಿದ ಯಾವುದೇ ತಿಂಗಳು. 
18)ಬೆಂಡೆಕಾಯಿ:ವರ್ಷವಿಡೀ ಬೆಳೆಯಬಹುದು,ಮಾರ್ಚ್, ಸೆಪ್ಟೆಂಬರ್ ಉತ್ತಮ. 
19)ಮೂಲಂಗಿ:ಮಾರ್ಚ್, ಏಪ್ರಿಲ್, ಮೇ ಹೊರತುಪಡಿಸಿ ಉಳಿದ ಕಾಲದಲ್ಲಿ ಬೆಳೆಯಬಹುದು. 
20)ಸೀಮೆಬದನೆ:ವರ್ಷದ ಎಲ್ಲಾ ತಿಂಗಳು. 
21)ಸೋರೆಕಾಯಿ:ಜೂನ್-ಜುಲೈ, ಜನವರಿ-ಫೆಬ್ರವರಿ
22)ಸೌತೆಕಾಯಿ:ಫೆಬ್ರವರಿಯಿಂದ ಜೂನ್ ತಿಂಗಳ ಅಂತ್ಯದವರೆಗೆ. 
23)ಹಸಿ ಮೆಣಸಿನಕಾಯಿ:ವರ್ಷ ಪೂರ್ತಿ ಬೆಳೆಯಬಹುದು.ಮಾರ್ಚ್-ಏಪ್ರಿಲ್, ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ್ ಉತ್ತಮ ತಿಂಗಳು. 
24)ಹಾಗಲಕಾಯಿ:ಜೂನ್-ಜುಲೈ, ಜನವರಿ-ಫೆಬ್ರವರಿ ಸರಿಯಾದ ಕಾಲ. 
25)ಹಿರೇಕಾಯಿ:ಫೆಬ್ರವರಿ ಯಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ. 
26)ಹೂಕೋಸು:ಜೂನ್,ಅಕ್ಟೋಬರ್ ತಿಂಗಳು ಸಕಾಲ.
27)ಹಸಿರು ಸೊಪ್ಪುಗಳು:ದಂಟು,ಹರಿವೆ, ಕೀರೆ, ಚಕ್ಕೋತ,ಬಸಳೆ, ಸಪ್ಪಸೀಗೆ,ಮೆಂತ್ಯ,ಕೊತ್ತಂಬರಿ,ಹುಳಿಚುಕ್ಕೆ,ಹಕ್ಕರಿಕೆ, ಪಾಲಕ್ ಇತ್ಯಾದಿ ಸೊಪ್ಪುಗಳನ್ನು ಮಳೆಗಾಲ ಬಿಟ್ಟು ಉಳಿದೆಲ್ಲ ಕಾಲದಲ್ಲೂ ಬೆಳೆಯಬಹುದು.

ಕೆಳಗಿನ ಆಡಿಯೋದಲ್ಲಿ ನಮ್ಮ ಅದ್ಬುತ ರೈತರಾದ ಕಾಳಪ್ಪನವರು ಮಾತನಾಡಿದ್ದಾರೆ,

ಆಡಿಯೋ ಫೈಲ್

ಕಣ್ಮರೆಯಾಗುತ್ತಿರುವ ಹಲವಾರು ಸಸ್ಯ ತರಕಾರಿ ಸೊಪ್ಪುಗಳ ಬೀಜಗಳು ಇವರಲ್ಲಿ ದೊರೆಯುವುದು ಒಂದು ವಿಶೇಷ, ಅವನ್ನು ನಾವು ಉಳಿಸಿ ಬೆಳೆಸಿ ಮತ್ತೆ ಉಪಯೋಗದ ಹಾದಿಗೆ ತರುವುದು ನಮ್ಮ ಗುರುತರವಾದ ಜವಾಬ್ದಾರಿ 

ನಮ್ಮ ಇನ್ನೊಬ್ಬ ಸಾಧಕರಾದ ಶ್ರೀ ಶಿವಕುಮಾರ್ ಸ್ವಾಮಿಯವರ ಮಾತುಗಳನ್ನು ಕೇಳಿ,

Shivakumar Swamy - 1

Shivakumar Swamy - 2


ನೈಸರ್ಗಿಕ ಕೃಷಿ, Connect With Nature

ನೈಸರ್ಗಿಕ ಕೃಷಿ ಒಂದು ವಿಬಿನ್ನ ಕೃಷಿ ಎಂದು ಇತ್ತೀಚೆಗೆ ಹೆಚ್ಚು ಪ್ರಚಲಿತವಾಗುತ್ತಿದೆ, ಆದರೆ ಇದುವೆ ನಮ್ಮ ಕೃಷಿ, ಪುರಾತನ ಕಾಲದಿಂದಲೂ ಅನುಸರಿಸುತ್ತಿರುವ ಪದ್ದತಿ.  ಆದರ...